ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೈತ್ಯ..

ದೈತ್ಯ..  ಹೀಗೊಂದು ಬದುಕು... ಚಿಕ್ಕ ಟೌನಲ್ಲಿ ನೆಲೆಸಿದ್ದ ನಾನು.. ಆಗಿನ್ನೂ  ನಗರಿಕರಣದತ್ತ ವಾಲುತಿದ್ದದ್ದು ನನ್ನೂರು .. ಸ್ಮರ್ಧಾತಕ ಯುಗದಲ್ಲಿ ಊರಿಂದ ಬೇರೆ ಊರಿಗೆ ಹೋಗಿ ಓದುವ ಪರಿಸ್ಥಿತಿ ಅದು..     ಇಂಜಿನಿಯರಿಂಗ್  ಆಯ್ದ ನಾನು , ಅದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದದ್ದು. ಕಾಲೇಜ್ಗೆ  ಸೇರಿಸಲೆಂದು ನನ್ನೊಟ್ಟಿಗೆ ನನ್ನಣ್ಣ ಇದ್ದ.. ಅದಾಗಲೇ ಬೆಂಗಳೂರಿಗನಾಗಿದ್ದ ಅವನು, ಪ್ರತಿ ಬಾರಿ ರಜಕ್ಕೆಂದು  ಬಂದಾಗ ಅವನ ಹಾವಭಾವ , ಆಂಗ್ಲ ಭಾಷೆಯ ಪ್ರಭಾವ ಕಾಣುತ್ತಲೇ ಇತ್ತು.. ಹೀಗೆ ಯೋಚನೆ ಮಾಡುತ್ತಿದ್ದ ನನಗೆ ಬಸ್ ಹತ್ತಿಸಲು ಬಂದಿದ್ದ ನನ್ನಪ್ಪ , ಅಣ್ಣನಿಗೆ "ಮೆಜೆಸ್ಟಿಕ್ ತಲುಪಿದಾಗ ಕರೆ ಮಾಡು "ಎಂದಾಗ ,ಮೆಜೆಸ್ಟಿಕ್ಜ್ ಅಂದರೇನು ?? ಬೆಂಗಳೂರಿಗೆ ತಾನೇ ಹೋಗುತ್ತಿರುವುದು ಎಂದು ಯೋಚಿಸುತ್ತಿದ್ದ ನನಗೆ “ಮೆಜೆಸ್ಟಿಕ್ -ಮೆಜೆಸ್ಟಿಕ್ ಲಾಸ್ಟ ಸ್ಟಾಪ್ ಇಳ್ಕೊಳಿ “ಎಂದು ದಡಬಡನೆ ಓಡಾಡುತ್ತಿದ್ದ ಕಂಡಕ್ಟರ್ ಅರೆಮುಂಜಾನೆಯಲ್ಲಿ ಕಾಣಲೇ ಇಲ್ಲಾ.  ಆದರೆ ಕಿರುಚಾಟ ಮಾತ್ರ ಜೋರಾಗಿದ್ದೂ, ನನ್ನಣ್ಣ "ಬೇಗಬೇಗನೆ ಬಾ" ಎಂದು  ಎಳೆದುಕೊಂಡು ಹೋಗುತ್ತಿದಂತೆ , ಮೈ ಮೇಲೆ ಬರುತ್ತಿದ್ದ ಜನ/ಬಸ್ಸು/ಕಾರು  ಮಧ್ಯದಲ್ಲಿ "ಎಂಗ ಫೋನು / ಮೇಡಂ ಆಟೋ/ ಎಕ್ಕಡಿಕಿ ಅಂಡಿ/ ಡ್ರಾಪ್?? " ಎಂದು ಕೇಳುವ ಆಟೋದವರನ್ನು ಕಂಡು ಮುಂಜಾವಿನ ಚಳಿಯಲ್ಲೂ ಬೆವೆತೆಬಿಟ್ಟೆ.. ಅಣ್ಣ ಇಲ್ಲದಿದ್ದರೆ ಅತ್ತು ಬಿಡುವುದೊಂದೇ ಬಾಕಿ ಇತ್

ನಾ ಕಂಡ ಕುಪ್ಪಳ್ಳಿ..

ಇಮೇಜ್
ನಾ ಕಂಡ ಕುಪ್ಪಳ್ಳಿ.. ಕನ್ನಡ-ಕವಿಗಳು , ಸಾಹಿತ್ಯ ಎಂದರೆ ನನ್ನೊಳಗಿನ ಪುಟ್ಟ ಹೃದಯದಲ್ಲಿ ಅದೇನೋ ಮಾರ್ಧ್ವನಿ.. ಕದನ ಮುಕ್ತಾಯದ ಕೌತುಕವಷ್ಟು  ಆತುರಾತುರವಾಗಿ ಕನ್ನಡ ಪುಸ್ತಕ ಓದಿ ಮುಗಿಸುವಷ್ಟು ಅಭಿಮಾನ.                         ಬಯಲುಸೀಮೆಯವಳಾದ ನನಗೆ, ಅದೇಕೋ ಮಲೆನಾಡಿಗೆ ಶಿರಶಾಸ್ಟಾಂಗ ನಮಸ್ಕಾರ  ಮಾಡಿ, ಮೈಮರೆತಿರುವ ಅತೀವ ಭಕ್ತನ ಒಡಲಾಳದ ಮನಸ್ಸಿನಂತೆ...      ಪೂರ್ಣ ಚಂದ್ರ ತೇಜಸ್ವಿ ನನ್ನ ಆರಾಧ್ಯ ದೈವ. ಅವರು ನನ್ನ ಪುಸ್ತಕ ಪ್ರೇಮವನ್ನು ಹಿಡಿದಿಟ್ಟಿರುವ ಮಹಾನ್ ದೈತ್ಯ.,  ನನಗಷ್ಟೇ  ಅಲ್ಲಾ , ಪ್ರತಿ ಕನ್ನಡಿಗನನ್ನು  ಕೂಡ!, ಏಕೆಂದರೆ ಅವರ ವ್ಯಕ್ತಿತ್ವವೇ ಹಾಗೆ..     ಅಪ್ಪನಂತೇ ಅಲ್ಲಾ ಅವರು!!    ಅವರ 'ಪರಿಸರದ ಕತೆಗಳು' ಓದುವಾಗ ಕಣ್ಣ ಮುಂದೆ ಹಾದುಹೋಗುವ ಸಾಹಿತ್ಯದ ಚಿತ್ರಣ ಕಂಡು, ಒಬ್ಬ ಮನುಷ್ಯ ಹೀಗೆಲ್ಲಾ ಬರೆಯಲು ಹೇಗೆ ಸಾಧ್ಯವೆಂದಾಗ , ನಾನ್ನುಡಿಯಂತೆ 'ಅಪ್ಪ ಹಾಕಿದ ಹಾಲದ ಮರದಂತೆ' ಇರಬಹುದೇನೋ , ಆದರೆ ಆಲದ ಮರದ ಬೇರಲ್ಲಿ, ಕಾಡಿನ ಔಷದಿ ಚಿಗುರೊಡೆದದ್ದು ಹೇಗೆ? ಎಂದು ಕೂಡ ಅನ್ನಿಸಿ ತರಾಟೆ ಯಾಕೆ., ಅಪ್ಪ-ಮಗನ ಸಾಹಿತ್ಯದ ದೇಣಿಗೆ ..ಕನ್ನಡ ನಾಡು ಸವಿದರು ಸಾಲದ ಕುಡಿಕೆ ಹೊನ್ನನ್ನು , ಅವರಿಬ್ಬರ  ಕಣ್ಣಲ್ಲಿ ಕಂಡ ಜಾಗ-ಯುಗದ ರಚನೆಯನ್ನು ಓದೋಣ ಎಂದು ಭಾವಿಸಿ , ಕುವೆಂಪುರವರ ಮಲೆಗಳಲ್ಲಿ ಮದುಮಗಳನ್ನು ಓದಿದೆ, ಆದರೆ ತೇಜಸ್ವಿ ಅವರ ಜುಗಾರಿ ಕ್ರಾಸ್ ಸಾಹಿತ್ಯಕ್ಕ್ಕೂ, ಕು

ನನ್ನಪ್ಪನ ಕ್ಯಾಮೆರಾ..

ಇಮೇಜ್
ನನ್ನಪ್ಪನ ಕ್ಯಾಮೆರಾ.. ನಾನು ಹುಟ್ಟಿದ್ದು ಬಳ್ಳಾರಿಯ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ.. ನನ್ನನ್ನು ಸ್ವಾಗತಿಸಲು ಅಮ್ಮ-ಅಕ್ಕಪಕ್ಕದ ಮನೆಯ ಅಜ್ಜಿಯಂದಿರು , ಆರು ವರುಷದ ಅಣ್ಣ ಹಾಗೂ ಮೂರು ವರುಷದ ಅಕ್ಕ ಇದ್ದರಂತೆ. ಅಪ್ಪ ಪರೀಕ್ಷೆ ಮೇಲ್ವಿಚಾರಕರಾಗಿ ಕೆಲಸಕ್ಕೆ ಹೋಗಿದ್ದರಂತೆ .. ಅಪ್ಪ ಎಂದೂ ರಜೆ ಹಾಕಿದವರಲ್ಲಾ.. ಅಣ್ಣನ ಶಾಲೆಯ ಹಾಜಾರಾತಿ ಕೂಡ ಹಾಗೆ ಇರಬೇಕೆಂದವರು .. ಪುಟ್ಟ ತಂಗಿ ಬರುವಳೆಂದೆಣಿಸಿ ಪುಟ್ಟ ಯಜಮಾನ-ನನ್ನಣ್ಣ ಶಾಲೆಗೆ ಹೋಗಲಿಲ್ಲವಂತೆ , ಮೂವತ್ತು ವರುಷ ಅವನಿಗೀಗ ..ಈಗಲೂ ಚುಡಾಯಿಸುತ್ತಾನೆ ..ನೀನು ಹುಟ್ಟಿ ನನ್ನ 100 % ಹಾಜಾರಾತಿ ತಪ್ಪಸಿದೆಯೆಂದು ..ಮಹಾನುಭಾವ, ನನ್ನನ್ನು  ಹಾಗೆ ಬೆಳೆಸಿದ್ದಾನೆ , ರಜೆ  ಹಾಕಿದರೆ ದೊಡ್ಡ ತಪ್ಪು ಎನ್ನುವಂತೆ . 108 ದೇವರಿಗೂ ಪ್ರಶ್ನಿಸಿ -ಕೈ ಮುಗಿದು ಇಬ್ಬರು ಕಾರ್ಪೊರೇಟ್ ಕೆಲಸದಲ್ಲಿ ಅನಿವಾರ್ಯ ಇದ್ದಾಗ ರಜೆ ತೆಗೆದುಕೊಳ್ಳುತ್ತೇವೆ...          ಮನೆಯಲ್ಲಿ ಚಿಕ್ಕವಳಾಗಿದ್ದರಿಂದ ಅಪ್ಪ-ಅಮ್ಮನಿಗೆ ಹೆಚ್ಚು ಮುದ್ದು  ನಾನು , ಆದರೆ ಈ 6-3 ವರುಷದ ಕಿಲಾಡಿಗಳಿದ್ದರಿಂದ ನನ್ನ ಜಗತ್ತು ಹೀಗೆ ಎಂದು ನಿರ್ಧಾರವಾಗಿತ್ತು ..ಅಣ್ಣ ಹೇಳಿದಂತೆ ನಡೆಯಬೇಕಾದ ನಿಯಮ ರಚಿಸಿಯಾಗಿತ್ತು ..ನನಗಂತ ಹೆಚ್ಚು ಆಟಿಕೆ ಏನೂ ಇರಲಿಲ್ಲ , ಅವರಾಡಿದ ತೊಟ್ಟಿಲು -ಮುರಿದ ಆಟಿಕೆಗಳು ಮಾತ್ರ.. ನಾನು ಹೇಗಿದ್ದೆ ಅಂತ ಈಗಲೂ ಅಷ್ಟು ನೆನಪಾಗುವುದಿಲ್ಲ ,ಆದರೆ ಮನೆಯಲ್ಲಿದ್ದ ಅಪ್ಪನ ಪುಟ್ಟ ಕ್ಯಾಮೆರಾ ನಮ್ಮ